ನೆಹರು ಮೈದಾನ ಅಥವಾ ಸೆಂಟ್ರಲ್ ಮೈದಾನವು ಭಾರತದ ಕರ್ನಾಟಕದ ಮಂಗಳೂರಿನಲ್ಲಿರುವ ಬಹು ಉದ್ದೇಶಿತ ಮೈದಾನವಾಗಿದೆ. ಈ ಮೈದಾನವು ನಗರದ ಹಂಪನಕಟ್ಟೆಯ ಹೃದಯಭಾಗದಲ್ಲಿದೆ. ಮೈದಾನವನ್ನು ಮುಖ್ಯವಾಗಿ ಫುಟ್ಬಾಲ್, ಕ್ರಿಕೆಟ್ ಮತ್ತು ಇತರ ಕ್ರೀಡೆಗಳ ಪಂದ್ಯಗಳನ್ನು ಆಯೋಜಿಸಲು ಬಳಸಲಾಗುತ್ತದೆ. ಇಲ್ಲಿ ಆಯೋಜಿಸಲಾದ ರಾಜಕೀಯ ರ್ಯಾಲಿಗಳು, ಧಾರ್ಮಿಕ ಉತ್ಸವಗಳು, ಪ್ರದರ್ಶನಗಳಂತಹ ಅನೇಕ ಸಾರ್ವಜನಿಕ ಕಾರ್ಯಕ್ರಮಗಳಿಗೆ ಹೆಸರುವಾಸಿಯಾಗಿದೆ. ನೆಹರು ಮೈದಾನಕ್ಕೆ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ಹೆಸರನ್ನು ಇಡಲಾಯಿತು. ನೆಹರು ಮೈದಾನವು ದೇಶೀಯ ಪಂದ್ಯಾವಳಿಗಳು ಮತ್ತು ಅನೇಕ ಅಂತರ-ಶಾಲಾ ಮತ್ತು ಕಾಲೇಜು ಪಂದ್ಯಾವಳಿಗಳನ್ನು ಆಯೋಜಿಸುವ ಪ್ರಮುಖ ಸ್ಥಳವಾಗಿದೆ. ಮಂಗಳೂರು ಸ್ಪೋರ್ಟ್ಸ್ ಕ್ಲಬ್ () ನಗರದಲ್ಲಿ ಜನಪ್ರಿಯ ಸಂಸ್ಥೆಯಾಗಿದ್ದು, ನೆಹರೂ ಮೈದಾನದಲ್ಲಿರುವ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ () ಮಂಗಳೂರು ವಲಯಕ್ಕೆ ಸಾಂಸ್ಥಿಕ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ದಕ್ಷಿಣ ಕನ್ನಡ ಫುಟ್ಬಾಲ್ ಅಸೋಸಿಯೇಷನ್ (), ನೆಹರು ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ವಾರ್ಷಿಕವಾಗಿ "ಸ್ವಾತಂತ್ರ್ಯ ದಿನದ ಕಪ್" ಅನ್ನು ಆಯೋಜಿಸುತ್ತದೆ. ದಕ್ಷಿಣ ಕನ್ನಡ, ಉಡುಪಿ, ಕೊಡಗು ಜಿಲ್ಲೆಗಳ ವಿವಿಧ ಶಾಲಾ-ಕಾಲೇಜುಗಳು ಭಾಗವಹಿಸಲಿದ್ದು, ಏಳು ವಿಭಾಗಗಳಲ್ಲಿ ಪಂದ್ಯಗಳು ನಡೆಯಲಿವೆ. == ಕ್ರೀಡಾ ಘಟನೆಗಳು == ಸ್ವಾತಂತ್ರ್ಯ ದಿನದ ಕಪ್ ಫುಟ್‌ಬಾಲ್ ಇಂಡಿಯನ್ ಪ್ರೀಮಿಯರ್ ಲೀಗ್ - ಫ್ಯಾನ್ ಪಾರ್ಕ್ == ಇತರೆ ಘಟನೆಗಳು == ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವ ಪರೇಡ್ ನೆಹರು ಮೈದಾನದ ಗಣೇಶ ಉತ್ಸವ ಆಟೋ ಎಕ್ಸ್ಪೋ == ಉಲ್ಲೇಖಗಳು ==